ಪೈಕಾ ದಂಗೆ* ( ಬಿದ್ರೋಹಾ-)- 1817 (2017 ಕ್ಕೆ 200 ವರ್ಷ )

*ಪೈಕಾ ದಂಗೆ* ( ಬಿದ್ರೋಹಾ-)- 1817
(2017 ಕ್ಕೆ 200 ವರ್ಷ )

ಪೈಕಾಗಳು ಒಡಿಶಾದ ಪ್ರಾಚೀನ ಯೋಧರ ಒಂದು ಪಂಗಡ

1857 ರಲ್ಲಿ ಸ್ವಾತಂತ್ರ್ಯದ ಮೊದಲ ಯುದ್ಧಕ್ಕೆ ಹಿಂದಿನದು ಆದರೆ ದಂಗೆ‌ ನೆಡೆಯಲಿಲ್ಲ.

ಈ ಬಂಡಾಯವು ಭಾರತದ ಪೂರ್ವ( ಓಡಿಸ್ಸಾ) ಭಾಗದಲ್ಲಿ ಬ್ರಿಟಿಷ್ ಆಡಳಿತದ ಅಡಿಪಾಯವನ್ನು ಬೆಚ್ಚಿಬೀಳಿಸಿತು.

ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ಬಾಡಿಗೆ ರಹಿತ ಭೂಮಿಯನ್ನು ವಶಪಡಿಸಿಕೊಂಡಾಗ ಈ ದಂಗೆ ನಡೆಯಿತು

1817 ರಲ್ಲಿ ನಡೆದ ಈ ಕ್ರಾಂತಿಗೆ ಕಾರಣರು ಪೈಕಾಗಳು. ಒಡಿಶಾದ ಗಜಪತಿ ರಾಜನ ಆಡಳಿತದಲ್ಲಿ ಯುದ್ಧದ ಸಂದರ್ಭ ರಾಜನಿಗೆ ಇವರು ನೆರವಾಗುತ್ತಿದ್ದರು. ಬಾಕ್ಸಿ ಜಗಂಢೂ ಬಿದ್ಯಾಧರ ಎಂಬ ನಾಯಕನ ನೇತೃತ್ವದಲ್ಲಿ ಬ್ರಿಟಿಷ್ ಆಡಳಿತದ ವಿರುದ್ಧ ಮೊದಲು ಹೋರಾಟ ನಡೆಸಿತ್ತು ಈ ಗುಂಪು. ಇದನ್ನು ಪೈಕಾ ಬಿದ್ರೋಹ ಅಥವಾ ದಂಗೆ ಎಂದು ಕರೆಯಲಾಗಿತ್ತು.

ವಿವರಣೆ- ಭಾರತದ ಇತಿಹಾಸದ ಘಟನೆಗಳು ಉದ್ದೇಶಪೂರ್ವಕವಾಗಿಯೇ ಮುಚ್ಚಲ್ಪಟ್ಟಿವೆ. ಬ್ರಿಟಿಷರು ತಮ್ಮ ಸ್ವಂತ ಲಾಭಕ್ಕೆಂದೇ ಆರಂಭಿಸಿದ ರೈಲ್ವೇ, ಅಂಚೆ-ತಂತಿ, ಉದ್ಯಮ, ಕೆಲ ಸುಧಾರಣೆಗಳನ್ನೇ ಘನವಾಗಿ ಪ್ರತಿಪಾದಿಸುವ ಆಷಾಢಭೂತಿ ಇತಿಹಾಸಕಾರರಿಗೆ ಭಾರತೀಯರ ಸ್ವಾತಂತ್ರ್ಯದ ಉತ್ಕಟೇಚ್ಛೆ, ಅದಕ್ಕಾಗಿನ ಹೋರಾಟ, ಬ್ರಿಟಿಷರ ಕ್ರೌರ್ಯವನ್ನು ವರ್ಣಿಸುವಾಗ ಕಣ್ಣಿಗಡ್ಡವಾಗಿ ಪೊರೆ ಬಂದು ಕೂತಿತು. ಸ್ವಾತಂತ್ರ್ಯ ವೀರ ಸಾವರ್ಕರ್ 1857ರ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಬರೆಯುವ ಸಾಹಸ ಮಾಡದಿರುತ್ತಿದ್ದರೆ, ಭಾರತದ ಸ್ವಾತಂತ್ರ್ಯ ಹೋರಾಟ ಗಾಂಧಿಯಿಂದಲೇ ಶುರುವಾಯಿತೆಂಬ ಕಾಂಗ್ರೆಸ್ಸಿಗರ ಅಪಲಾಪದ ಮೋಡಿಗೆ ಪ್ರತಿಯೊಂದು ಭಾರತದ ಪೀಳಿಗೆ ಒಳಗಾಗುತ್ತಿತ್ತೇನೋ. 1857ಕ್ಕೂ ಮುನ್ನ ನಡೆದ ಹಲವಾರು ಕ್ರಾಂತಿ ಹೋರಾಟಗಳು 1857ರ ಮಹಾ ಸ್ವಾತಂತ್ರ್ಯ ಸಂಗ್ರಾಮಕ್ಕೆ ಭದ್ರತಳಹದಿಯೊದಗಿಸಿದವು ಎನ್ನಲಡ್ಡಿಯಿಲ್ಲ. ಇದರೊಂದಿಗೆ ಭಾರತೀಯರಲ್ಲಿ ಐಕ್ಯಮತವಿರಲಿಲ್ಲ, ಹೋರಾಡದೆ ದಾಸ್ಯದ ಬಾವಿಗೆ ಬೀಳುವಂತಾಯಿತು ಎನ್ನುವ ಪೊಳ್ಳು ವಾದಗಳೆಲ್ಲ ಕಾಲಕಾಲಕ್ಕೂ ಇಲ್ಲಿ ನಡೆದ ಸಂಘರ್ಷಗಳ ಬೆಳಕಿನಲ್ಲಿ ಕರಗಿ ಹೋಗುತ್ತವೆ. ಭಾರತೀಯರ ಸ್ವಾತಂತ್ರ್ಯ ಪ್ರಾಪ್ತಿಯ ತುಡಿತದ ಅಂತಹ ಒಂದು ಕಥೆಯೇ ಪೈಕಾ ಕ್ರಾಂತಿ!

               ಪೈಕಾಗಳು ಒಡಿಶಾದ ಪ್ರಾಚೀನ ಯೋಧರ ಒಂದು ಪಂಗಡ. ಕಾಲ ಬದಲಾದರೂ ಪೈಕಾಗಳ ವೀರತ್ವಕ್ಕೆ ಕುಂದು ಬಂದಿರಲಿಲ್ಲ. ಯುದ್ಧದ ಸಮಯದಲ್ಲಿ ರಾಜನ ಸೈನ್ಯದಲ್ಲಿ ಮುಂದಾಳುಗಳಾಗಿ, ಉಳಿದ ಸಮಯದಲ್ಲಿ ಕೋತ್ವಾಲ, ಆರಕ್ಷಕರಾಗಿ ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದ ಧೀರರು ಪೈಕಾಗಳು. ಇವರ ಸೇವಾ ಮನೋಭಾವನೆಯಿಂದ ಸಂತೃಪ್ತರಾದ ರಾಜರು ಕಾಲಕಾಲಕ್ಕೆ ಪೈಕಾಗಳಿಗೆ ಭೂಮಿಯನ್ನು ಕಾಣಿಕೆಯಾಗಿ ನೀಡುತ್ತಿದ್ದರು. ಕತ್ತಿವರಸೆಯಲ್ಲಿ ನಿಷ್ಣಾತರಾದ ಪ್ರಹರಿಗಳು, ಧನುರ್ವಿದ್ಯಾ ಪ್ರವೀಣ ಧೇಂಕಿಯಾಗಳು, ಕೋವಿಯ ಕೋವಿದರಾದ ಬನುವಾಗಳೆಂಬ ಮೂರು ವರ್ಗಗಳು ಈ ಪೈಕಾಗಳಲ್ಲಿವೆ.

              1803ರಲ್ಲಿ ಮರಾಠರಿಂದ ಒಡಿಷಾವನ್ನು ಕಿತ್ತುಕೊಂಡ ಆಂಗ್ಲರು ಅಲ್ಲಿ ತಮ್ಮ ಆಡಳಿತ ವ್ಯವಸ್ಥೆಯನ್ನು ಸ್ಥಾಪಿಸಹೊರಟಾಗ ಅದು ಸಹಜವಾಗಿ ಸಾಮಂತ ಖೋರ್ಡಾ ದೊರೆ ಎರಡನೇ ಮುಕುಂದ ದೇವನ ಕಣ್ಣು ಕೆಂಪಗಾಗಿಸಿತು. ಅತ ಪೈಕಾಗಳನ್ನು ಜೊತೆಗೂಡಿಸಿಕೊಂಡು ಹೋರಾಡಲು ಅಣಿಯಾಗುತ್ತಿರುವಂತೆಯೇ ಬ್ರಿಟಿಷರು ಸುತ್ತುವರಿದು ಆತನನ್ನು ಖೋರ್ಡಾದಿಂದ ಹೊರದಬ್ಬಿದರು. ಆತನ ಅರಮನೆ, ರಾಜ್ಯ ಬ್ರಿಟಿಷರ ವಶವಾಯಿತು. ಪೈಕಾಗಳ ಭೂಮಿಯನ್ನೂ ಈಸ್ಟ್ ಇಂಡಿಯಾ ಕಂಪೆನಿಯ ಸರಕಾರ ಕಿತ್ತುಕೊಂಡಿತು. ಹೀಗೆ ಇನ್ನೂರು ವರ್ಷಗಳಿಂದ ರಾಜಧಾನಿಯಾಗಿ ಮೆರೆದಿದ್ದ ಖೋರ್ಡಾದ ಶುಕ್ರದೆಸೆ ಅಂತ್ಯವಾಗುವ ಸೂಚನೆ ದೊರಕಿತು. ಪರಂಪಾರಗತವಾಗಿ ತಮಗೆ ದೊರೆತಿದ್ದ ಉಂಬಳಿಯನ್ನು ಕಿತ್ತುಕೊಂಡು ಸುಲಿಗೆ, ದಬ್ಬಾಳಿಕೆಯನ್ನು ಆರಂಭಿಸಿದ ಕಂಪೆನಿಯ ಮೇಲೆ ಪೈಕಾಗಳು ಸಹಜವಾಗಿಯೇ ಆಕ್ರೋಶಿತಗೊಂಡರು. ಪ್ರಚಲಿತವಿದ್ದ ಕೌರಿ ಕರೆನ್ಸಿ ವ್ಯವಸ್ಥೆಯನ್ನು ಬದಲಾಯಿಸಿತು ಕಂಪೆನಿ ಸರಕಾರ. ವಹಿವಾಟುಗಳೆಲ್ಲಾ ಬೆಳ್ಳಿಯ ನಾಣ್ಯಗಳಲ್ಲೇ ನಡೆಯಬೇಕೆಂದು ತಾಕೀತು ಮಾಡಿತು. ಬೆಳ್ಳಿಯ ನಾಣ್ಯಗಳ ಪೂರೈಕೆ ಕಡಿಮೆಯಿದ್ದ ಕಾರಣ ಜನತೆ ತೆರಿಗೆ ಸಲ್ಲಿಸಲು ವಿಫಲವಾದಾಗ ನಿರ್ದಾಕ್ಷಿಣ್ಯವಾಗಿ ಅವರ ಭೂಮಿಯನ್ನು ಸೆಳೆದುಕೊಂಡಿತು. ಸಮುದ್ರದ ನೀರಿನಿಂದ ಉಪ್ಪು ತಯಾರಿಸುವುದನ್ನೂ ನಿಷೇಧಿಸಿತು. ಇದು ಪೈಕಾಗಳನ್ನು ಮತ್ತಷ್ಟು ಕೆರಳಿಸಿತು. ಬ್ರಿಟಿಷರ ದುರ್ನೀತಿಯಿಂದ ಕ್ರೋಧಗೊಂಡ ಸಾಮಾನ್ಯ ಜನತೆ ಬ್ರಿಟಿಷರ ವಿರುದ್ಧ ಮಸೆದು ನಿಲ್ಲಲು ಪೈಕಾಗಳನ್ನು ಹುರಿದುಂಬಿಸಿತು.

              ಆಗ ಮುಕುಂದ ದೇವನ ಸೇನಾಧಿಪತಿಯಾಗಿದ್ದವನು ಜಗಬಂಧು ವಿದ್ಯಾಧರ ಬಕ್ಷಿ. ಬಕ್ಷಿ ಎನ್ನುವುದು ಒರಿಸ್ಸಾದಲ್ಲಿ ಸೇನಾ ಮುಖ್ಯಸ್ಥರಿಗೆ ನೀಡಲಾಗುತ್ತಿದ್ದ ಉಪಾಧಿ. ದೇಶಕ್ಕೆ ಸಲ್ಲಿಸಿದ ಸೇವೆಗೆ ಕೃತಜ್ಞತಾಪೂರ್ವಕವಾಗಿ ರಾಜವಂಶದಿಂದ ವಂಶದ ಪೂರ್ವಜರಿಗೆ ಬಂದ ಜಹಗೀರು ಜಮೀನು ಜಗಬಂಧುವಿನ ಕೈಯಲ್ಲಿ ಝಗಮಗಿಸುತ್ತಿತ್ತು. ಆ ಜಮೀನನ್ನು ಮೋಸದಿಂದ ಪುರಿಯ ಜಿಲ್ಲಾಧಿಕಾರಿ ವಶಪಡಿಸಿಕೊಂಡ. ತನಗಾದ ಮೋಸ ಜೊತೆಗೆ ತನ್ನ ಒಡೆಯನಿಗಾದ ಅನ್ಯಾಯ, ರೈತಾಪಿ ವರ್ಗದ ಮೇಲೆ ಬ್ರಿಟಿಷರು ಎರಗುತ್ತಿದ್ದ ವೈಖರಿಯನ್ನು ನೋಡಿ ಜಗಬಂಧು ರೋಸಿಹೋದ. ಆತ ರೈತಾಪಿ, ಬುಡಕಟ್ಟು ವರ್ಗ ಹಾಗೂ ತನ್ನ ಪೈಕ ಜನಾಂಗವನ್ನು ಸಂಘಟಿಸಿದ. ಮಾರ್ಚ್ 1817ರಲ್ಲಿ 400 ಜನರಿದ್ದ ಖೋಂಡ್ ಎಂಬ ಬುಡಕಟ್ಟು ವರ್ಗ ಖೋರ್ಡಾ ಹಾಗೂ ಘೂಮುಸರ್ಗಳನ್ನು ಬ್ರಿಟಿಷ್ ಅಧಿಪತ್ಯದಿಂದ ಬಿಡುಗಡೆಗೊಳಿಸಲು ಧಾವಿಸಿ ಬಂತು. ಜಗಬಂಧು ತನ್ನ ಪೈಕ ಯೋಧರು ಹಾಗೂ ರಾಜಾ ಮುಕುಂದ ದೇವನೊಡನೆ ಈ ಯೋಧ ಪಡೆಯನ್ನು ಸೇರಿಕೊಂಡು ಅದರ ನೇತೃತ್ವ ವಹಿಸಿದ. ಈ ಕ್ರಾಂತಿ ಸೈನ್ಯ ಕೈಗೆ ಸಿಕ್ಕ ಬ್ರಿಟಿಷ್ ಅಧಿಕಾರಿಗಳನ್ನು ಸದೆಬಡಿದು ಅವರನ್ನು ಓಡಿಸಿ ಎರಡೂ ನಗರಗಳನ್ನೂ ಸ್ವತಂತ್ರಗೊಳಿಸಿತು. ಮಾರ್ಗ ಮಧ್ಯದಲ್ಲಿ ಜಮೀಂದಾರರು, ವ್ಯಾಪಾರಿಗಳು, ಕೂಲಿ ಕಾರ್ಮಿಕರು ಹೀಗೆ ಸಮಾಜದ ಎಲ್ಲಾ ವರ್ಗದ ಬೆಂಬಲ ಈ ಸೇನೆಗೆ ದೊರಕಿತು. ಕನಿಕಾ, ಕುಜಾಂಗ್, ನಯಾಘರ್, ಘೂಮುಸರ್ಗಳ ಅರಸರು, ಕರಿಪುರ, ಮಿರ್ಚ್ ಪುರ, ಗೋಲ್ರಾ, ಬಲರಾಮಪುರ, ರೂಪಾಸಾ ಮೊದಲಾದ ಸ್ಥಳಗಳ ಜಮೀಂದಾರರು ಈ ಕ್ರಾಂತಿ ಸೇನೆಗೆ ಸಹಕಾರಿಯಾಗಿ ನಿಂತರು. ಈ ಕ್ರಾಂತಿ ಕ್ಷಣಮಾತ್ರದಲ್ಲಿ ಪುರಿ, ಪಿಪ್ಲಿ ಹಾಗೂ ಕಟಕ್'ಗಳಿಗೂ ಹಬ್ಬಿತು. ಪುರಿಯ ಮಂದಿರದ ಮೇಲೆ ಕೇಸರಿ

Post a Comment

0 Comments